Book Description
ಸಂಘದ ಸ್ವಯಂಸೇವಕರೂ ಹಾಗೂ ಪ್ರಚಾರಕರೂ ಆಗಿದ್ದ ವಾಜಪೇಯಿಯವರು ಮದುವೆಯಾಗಲಿಲ್ಲ. ಆದರೆ ತನ್ನನ್ನು ತಾನು ’ನಾನು ಕುಮಾರ, ಬ್ರಹ್ಮಚಾರಿ ಅಲ್ಲ’ ಎಂದು ಕರೆದುಕೊಂಡರು. ಅಟಲ್ ಬಿಹಾರಿ ವಾಜಪೇಯಿಯವರು ಏಕಕಾಲಕ್ಕೆ ರಾಜಕಾರಣಿ ಹಾಗೂ ಕವಿ ಎರಡೂ ಆಗಿದ್ದಾರೆ. ಈ ಎರಡೂ ಪ್ರತಿಭೆಗಳು ಕೈ ಹಿಡಿದು ಸಾಗುವುದು ತುಂಬಾ ಅಪರೂಪ. ವಾಜಪೇಯಿಯವರನ್ನು ಅನೇಕರು ಅಜಾತಶತ್ರು ಎನ್ನುತ್ತಾರೆ. ಅತ್ಯಂತ ಜನಪ್ರಿಯ ನಾಯಕರಲ್ಲಿ ಅವರೂ ಒಬ್ಬರು. ಅವರು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಕೈಂಕರ್ಯದಲ್ಲಿ ನಂಬಿಕೆ ಇಟ್ಟವರು. ಶ್ರೀ ವಾಜಪೇಯಿಯವರ ರಾಜಕೀಯ ಜೀವನವು ವಿಶಾಲವಾದ ಸಮುದ್ರವಿದ್ದಂತೆ. ಇದರಲ್ಲಿರುವ ಮುತ್ತುಗಳನ್ನು ಆರಿಸುವ ಕಾರ್ಯವನ್ನು ವಿಜಯ್ ತ್ರಿವೇದಿಯವರು ಈ ಕೃತಿಯಲ್ಲಿ ಮಾಡಿದ್ದಾರೆ.
Reviews
There are no reviews yet.