Book Description
ಮುಸಲ್ಮಾನರ ಆಳ್ವಿಕೆ ಇಡೀ ದೇಶವ್ಯಾಪಿಯಾದಂತೆ ಹಿಂದೂಗಳ ವಿರೋಧವೂ ವ್ಯಾಪಕವಾಗಿತ್ತು. ದೇಶದಾದ್ಯಂತ ವಿಶಾಲ ಅರಣ್ಯಗಳಿದ್ದು, ಅರಣ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಹೋರಾಟfನಡೆಸುವುದು ಆಗ ಉಳಿದಿದ್ದ ಸುರಕ್ಷಿತ ಮಾರ್ಗ. ಈ ಉದ್ದೇಶದಿಂದ ಕಾಡು ಸೇರಿದಂತಹ ಜನರು ಕಾಡು ವಾಸ್ತವ್ಯದ ಈ ಕಠಿಣ ಜೀವನದಲ್ಲಿ ತಮ್ಮದೇ ಆದ ಸಾಮಾಜಿಕ ರೀತಿ ನೀತಿ, ತಮ್ಮದೇ ಆದ ಸಮಷ್ಟಿ ಜೀವನದ ಕಾನೂನು ಹಾಗೂ ತಮ್ಮದೇ ಆದ ಆಚಾರ-ವಿಚಾರಗಳನ್ನು ರೂಪಿಸಿಕೊಂಡರು. ಇದು ಕೆಲವೊಮ್ಮೆ ಅವರಲ್ಲೇ ಅಡಗಿದ್ದ ಮೇಲು ಜಾತಿ, ಕೀಳು ಜಾತಿ ಎಂಬ ಬೇಧಭಾವ ಹಾಗೂ ಸಂಘರ್ಷಕ್ಕೆ ಕಾರಣವಾಗಿತ್ತು. ಇಂತಹ ಕೆಲವು ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ವರ್ಗಗಳು ಮಧ್ಯಯುಗದ ಭಾರತದಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಬೆಳಕು ಚೆಲ್ಲುವುದೇ ಈ ಪುಸ್ತಕದ ಉದ್ದೇಶ.
Reviews
There are no reviews yet.