Roll over image to zoom in
ಚಾಣಕ್ಯ ನೀತಿ ಸೂತ್ರಗಳು
₹170.00₹180.00 (-6%)
ಇಂದಿನ ಪ್ರಸ್ತುತಿ ಡಾ|| ಕೆ ಎಸ್ ನಾರಾಯಣಾಚಾರ್ಯ
Description
ಆಚಾರ್ಯ ಚಾಣಕ್ಯ ಒಬ್ಬ ಮಹಾಪುರುಷ. ನಮ್ಮ ದೇಶ ಕಂಡ ಮಹಾ ರಾಜಶಾಸ್ತ್ರ ದಾರ್ಶನಿಕರಲ್ಲಿ ಅಗ್ರಗಣ್ಯ. ತಕ್ಷಶಿಲೆಯಲ್ಲಿ ಬೋಧಿಸಿ, ನವನಂದರ ನಿಗ್ರಹ ಮಾಡಿ, ದುರುಳ ಸಾಮ್ರಾಜ್ಯವನ್ನು ಅಳಿಸಿ, ಶಿಷ್ಯನಾದ ಚಂದ್ರಗುಪ್ತ ಮೌರ್ಯನಿಗೆ ಪಟ್ಟಗಟ್ಟಿ, ಮಂತ್ರಿ ಪದವಿಯನ್ನೊಲ್ಲದೇ, ಅಧ್ಯಾಪಕನಾಗಿಯೇ ಮರಳಿದ ಮಹಾ ತ್ಯಾಗೀ, ತಪಸ್ವೀ, ಚುರುಕು ರಾಜಕಾರಣಿ. ಬಿಡದೇ ಹಠದಿಂದ ಸತ್ಕಾರ್ಯಗಳನ್ನು ಸಾಧಿಸುವ ಛಲ, ಧರ್ಮ-ಶ್ರದ್ಧೆ, ಸನಾತನ ಶ್ರೇಷ್ಠ ಚಿಂತನೆಯಲ್ಲಿ ಆಳದ ಪರಿಶ್ರಮ, ವಿಶ್ವಾಸ, ಇಂಥ ಗುಣಗಳಿಂದ ಇಂದಿಗೂ ಆದರ್ಶಪ್ರಾಯನಾದ ಈ ಮಹಾನುಭಾವ, ವಸಿಷ್ಠ, ಜಮದಗ್ನಿ, ಪರಶುರಾಮ, ಅಗಸ್ತ್ಯರ ಸಾಲಿನಲ್ಲಿ ನಿಲ್ಲಬಲ್ಲ ಐತಿಹಾಸಿಕ ವ್ಯಕ್ತಿ.