Book Description
ಭಾರತದ ಪ್ರಜೆಯಾದ ನನಗೆ, ದೇಶ ನನ್ನ ತಾಯಿ. ಬಂದವರೆಲ್ಲಾ ಬಗೆದಿದ್ದಾರೆ. ಬರಡಾಗಿಸುವ ಪ್ರಯತ್ನ ಮಾಡಿದ್ದಾರೆ. ಸೆರೆಗೆಳೆದವರೆಷ್ಟೋ, ಬಳಸಿಕೊಂಡವರೆಷ್ಟೋ. ಆಳ್ವಿಕೆಯ, ಆಡಳಿತದ ನೆಪದಲ್ಲಿ ನಡೆದದ್ದು ಲೂಟಿ ಮತ್ತು ಲಂಪಟತನ. ಅವನು ನನ್ನ ಚರಿತ್ರೆ ಬರೀತಾನೆ. ನನ್ನಪ್ಪ ಯಾರು ಅನ್ನೋದನ್ನ ಅವನು ತೋರಿಸ್ತಾನೆ. ಅದನ್ನು ನಂಬಿ ನಾನು ಬದುಕ್ತೀನಿ. ಅವನ್ಯಾರೋ ದಂಡು ಕಟ್ಟಿಕೊಂಡು, ಲೂಟಿಗೆ ಬಂದು, ಇಲ್ಲಿಯ ಭಂಡಾರವನ್ನು ಕದ್ದು, ಮೆದ್ದು, ಹೆಣ್ಣುಗಳನ್ನು ಭೋಗಿಸಿ, ಅಧರ್ಮ ಅನೈತಿಕತೆಯನ್ನು ಪ್ರಜ್ಞೆಯಲ್ಲಿ ಬಿತ್ತಿ, ವೇದ ಉಪನಿಷತ್ತು ಒಂದು ಅನಾಗರೀಕ ಸಮಾಜದ ಬಡಬಡಿಕೆ ಮತ್ತು ರಾಮಾಯಣ, ಮಹಾಭಾರತ ಅಷ್ಟೇನೂ ಸ್ವಸ್ಠವಲ್ಲದ, ಬಲಿಯದ ಮೆದುಳಿನ ಕಲ್ಪನೆ ಅಂತಾನೆ. ಇದನ್ನು ನಾನು ನಂಬುತ್ತೀನಿ, ಬೋಧಿಸುತ್ತಿನಿ.
ಪುಸ್ತಕ ಓದಿದ ನಂತರ ಮೊದಲು ಮನಸ್ಸಿಗೆ ಬಂದ ಭಾವ, ಷಂಡತನದ ಅರಿವೂ ಇಲ್ಲದ ಒಂದು ನಿರ್ಬೀಜ ತಳಿಯ ಭಾಗ ನಾನೂ ಹೌದಾ? ಈ ಷಂಡತನದ ಅರಿವಾಗಿ ಅದನ್ನು ತೊಡೆದುಕೊಳ್ಳುವ ಭಾವ ಶುರುವಾದರೆ, ಈ ಪುಸ್ತಕ ಸಾರ್ಥಕ.
Reviews
There are no reviews yet.