ಗಾಂಧೀಯ ಅರ್ಥಶಾಸ್ತ್ರ

216.00360.00 (-40%)

In stock

ಪ್ರೊ ಎಂ ಎಂ ಗುಪ್ತ

216.00360.00 (-40%)

Description

ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ನೀಡಿ, ಬ್ರಿಟಿಷರೊಂದಿಗೆ ನಿರಂತರ ಸಂಘರ್ಷ ನಡೆಸುತ್ತಲೇ ಗಾಂಧಿಜೀ ಭಾರತೀಯರ ಸಮಾಜಜೀವನದ ಸುಧಾರಣೆಯ ಕಡೆಗೂ ಗಮನಹರಿಸಿದ್ದರು. ಭಾರತದ ಗ್ರಾಮಗಳು ಹೇಗಿರಬೇಕು?; ಕೃಷಿ-ಗುಡಿಕೈಗಾರಿಕೆಗಳು-ಕುಲಕಸುಬುಗಳ ಅಗತ್ಯ, ಮಹತ್ವ ಏನು?; ಭಾರತೀಯರ ಜೀವನಶೈಲಿಯಲ್ಲಿಯೇ ಅಂತರ್ಗತವಾಗಿರುವ ಗಳಿಕೆ-ಉಳಿಕೆಯ ಕಲ್ಪನೆಗಳೇನು?; ಜಗತ್ತು ಕೈಗಾರಿಕಾ ಕ್ರಾಂತಿಯಿಂದ ಪ್ರಭಾವಿತಗೊಂಡಿರುವ ಸಮಯದಲ್ಲಿ ಭಾರತೀಯರ ’ಅಭಿವೃದ್ಧಿ ಪಥ’ ಯಾವ ದಿಕ್ಕಿನೆಡೆಗೆ ಸಾಗಬೇಕು?; ದಿನದಿಂದ ದಿನಕ್ಕೆ ಹೊಸ ಹೊಸ ಸಂಶೋಧನೆ ಆವಿಷ್ಕಾರಗಳೊಂದಿಗೆ ಮುನ್ನುಗ್ಗುತ್ತಿರುವ ವಿಜ್ಞಾನ-ತಂತ್ರಜ್ಞಾನಗಳಿಗೆ ಭಾರತೀಯರು ಯಾವ ಪ್ರಮಾಣದಲ್ಲಿ ತೆರೆದುಕೊಳ್ಳಬೇಕು? – ಇತ್ಯಾದಿ ಅನೇಕ ಮುಖಗಳಲ್ಲಿ ಗಾಂಧಿಯವರ ಜಿಜ್ಞಾಸೆ ನಡೆದಿತ್ತು.
ಗಾಂಧಿಯವರ ಬರಹ-ಭಾಷಣ-ಪತ್ರೋತ್ತರಗಳ ಅಗಾಧ ಸಾಹಿತ್ಯರಾಶಿಯಲ್ಲಿ ಚೆದರಿಕೊಂಡಿದ್ದ ಆರ್ಥಿಕ ಚಿಂತನೆಗಳನ್ನೆಲ್ಲ ಒಂದೆಡೆ ಸೇರಿಸಿ, ವ್ಯಾಪಕ ವಿಶ್ಲೇಷಣೆಗೊಳಪಡಿಸಿರುವ ಕೃತಿ ಗಾಂಧೀಯ ಅರ್ಥಶಾಸ್ತ್ರ.

Main Menu

ಗಾಂಧೀಯ ಅರ್ಥಶಾಸ್ತ್ರ

216.00360.00 (-40%)

Add to Cart