Book Description
ಭಾರತದ ಹನ್ನೊಂದನೆಯ ರಾಷ್ಟ್ರಪತಿಗಳಾಗಿ, ವಿಜ್ಞಾನಿಗಳಾಗಿ, ತಾಂತ್ರಿಕ ಆಡಳಿತಗಾರರಾಗಿ, ಶಿಕ್ಷಕರಾಗಿ, ಚಿಂತಕರಾಗಿ ಡಾ. ಕಲಾಂ ಅವರು ತಾವು ಕಂಡುಂಡ ಅಪಾರ ಅನುಭವಗಳನ್ನು ಬಳಸಿಕೊಂಡು ಉತ್ತಮ ಪ್ರಭುತ್ವದ ದೃಷ್ಟಿಕೋನಗಳು ಹೇಗಿರಬೇಕೆಂದು ವಿಶದವಾಗಿ ಚರ್ಚಿಸಿದ್ದಾರೆ. ಈ ಕೃತಿಯಲ್ಲಿ ಭ್ರಷ್ಟಾಚಾರದ ನಿಗ್ರಹ, ಪ್ರಭುತ್ವ ಹಾಗೂ ತತ್ಸಂಬಂಧಿತ ಉತ್ತರದಾಯಿತ್ವ ಮುಂತಾದವುಗಳ ಬಗ್ಗೆ ವಾಸ್ತವಿಕ ನೆಲೆಗಟ್ಟಿನ ಸಲಹೆಗಳಿವೆ. ಪ್ರಾಮಾಣಿಕತೆಯಿಂದ, ನೇರ ನೈತಿಕತೆಯಿಂದ ಹಾಗೂ ಹೆಚ್ಚಿನ ಶ್ರಮದ ದುಡಿಮೆಯಿಂದ ಮಾತ್ರವೇ ನಾವು ಅಭಿವೃದ್ಧಿಗೊಂಡ ಭಾರತ ಎಂಬ ಉದ್ದಿಷ್ಟ ಕಾರ್ಯವನ್ನು ಸಾಧಿಸಬಹುದಾಗಿದೆ.
Reviews
There are no reviews yet.