Book Description
ಭಾರತೀಯ ಸಂಸ್ಕೃತಿಯ ಬಾಹ್ಯ ವ್ಯಾವಹಾರಿಕ ರೀತಿ-ರಿವಾಜುಗಳಿಗಿಂತ ಅದರ ಭಾವನಾತ್ಮಕ ಅಧಿಷ್ಠಾನ ಮಹತ್ತ್ವದ್ದೆಂದು ಮನಗಂಡು ಕಾದಂಬರಿ ಮಾಧ್ಯಮವನ್ನು ಬಳಸಿ ಬೆಳೆಸಿದವರು ಬಂಕಿಮಚಂದ್ರರು. ಬಂಕಿಮರ ‘ಆನಂದಮಠ’ ಭಾರತೀಯ ಸಾಹಿತ್ಯಕ್ಕೆ ಒಂದು ಅನುಪಮ ಕೊಡುಗೆ. 1770ರ ದಶಕದ ಆರಂಭಕಾಲದಲ್ಲಿ ಬಂಗಾಳದಲ್ಲಿ ಭೀಕರ ಕ್ಷಾಮವಿದ್ದಾಗಲೂ ಮ್ಲೇಚ್ಛ ಸರ್ಕಾರ ನಡೆಸುತ್ತಿದ್ದ ಜನರ ಮೇಲಿನ ಅಸೀಮ ದಮನವನ್ನೂ ನಿರ್ದಯ ಶೋಷಣೆಯನ್ನೂ ವಿರೋಧಿಸಿ ಸಂತ-ಸಂನ್ಯಾಸಿಗಳು ನಡೆಸಿದ ಜನಾಧಾರಿತ ಸಮರವನ್ನು ವಸ್ತುವಾಗಿರಿಸಿಕೊಂಡ ಕಾಲ್ಪನಿಕ ಕಾದಂಬರಿ ‘ಆನಂದಮಠ’.
‘ವಂದೇ ಮಾತರಂ’ ಗೀತೆಯನ್ನೊಳಗೊಂಡ ಈ ಕಾದಂಬರಿ ದಶಕಗಳುದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರ ರಣಘೋಷವಾಗಿ ಮೆರೆಯಿತು. ಈ ಕಾದಂಬರಿಯು ಚಿರಂತನ ಸ್ಫೂರ್ತಿಸ್ರೋತವಾಗಿ ಜನಮಾನಸದಲ್ಲಿ ನೆಲೆನಿಂತಿದೆ.
Reviews
There are no reviews yet.