Book Description
ಪಾಶ್ಚಾತ್ಯ ರಾಷ್ಟ್ರಗಳ ಇಂದಿನ ಗೊಂದಲಕ್ಕೆ ಒಂದು ಮುಖ್ಯ ಕಾರಣ, ಸೃಷ್ಟಿಯನ್ನು ಭಿನ್ನಭಿನ್ನ ಅಂಶಗಳಾಗಿ ಪರಿಗಣಿಸುವ ಪೃಥಗ್ ದೃಷ್ಟಿ. ಸೃಷ್ಟಿಯ ವೈವಿಧ್ಯದ ಹಿಂದೆ ಅಡಗಿರುವ ಏಕತೆಯನ್ನು ಅರಸುವುದು ಭಾರತದ ಪ್ರಯತ್ನ. ಇದೇ ಭಾರತೀಯ ಸಂಸ್ಕೃತಿಯ ಕೇಂದ್ರ ಬಿಂದು. ಸೃಷ್ಟಿಯಲ್ಲಿ ಸಂಘರ್ಷ ಸ್ಪರ್ಧೆಗಳು ಇರುವಂತೆ ಸಹಕಾರ ಸಹಯೋಗಗಳೂ ಇವೆ. ಜಗತ್ತಿನ ವಿವಿಧ ಅಂಗಗಳ ಪರಸ್ಪರ ಪೂರಕತೆಯನ್ನು ಮನಗಂಡವರು, ಭಾರತೀಯ ದಾರ್ಶನಿಕರು. ವ್ಯಕ್ತಿಯೂ ಸಮಾಜವೂ ವಿವಿಧ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅನುಸರಿಸುವ ಕ್ರಮಗಳು ಘರ್ಷಣೆಗೆ ಎಡೆಗೊಡದಂತೆ ನೋಡಿಕೊಳ್ಳುವ ಸೂತ್ರವೇ ಧರ್ಮ. ವ್ಯಕ್ತಿಸ್ವಾರ್ಥಕ್ಕೆ ಪ್ರತಿಯಾದ ಸಮಷ್ಟಿದೃಷ್ಟಿಯೇ ಧರ್ಮ, ಏಕಾತ್ಮ ಮಾನವತೆ.ಈ ದಿಶೆಯಲ್ಲಿ ಆಳವಾಗಿ ಚಿಂತನೆ ನಡೆಸಿದ ಪಂಡಿತ ದೀನದಯಾಳ ಉಪಾಧ್ಯಾಯ ಅವರ ಕಾಂತಿಯುತವೂ ತರ್ಕಸಮ್ಮತವೂ ಆದ ವಿಚಾರಧಾರೆಯ ಒಂದು ಸೀಳುನೋಟವನ್ನು ಈ ಪುಸ್ತಕದಲ್ಲಿ ಕಾಣಬಹುದು.
Reviews
There are no reviews yet.