ಮಂಥನ

350.00

Book Description

ಸ್ವಾತಂತ್ರ್ಯೋತ್ತರ ಭಾರತದ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ಅವಲೋಕಿಸಿದಾಗ ಮೌಲ್ಯವಂತಿಕೆಯ ವೈಚಾರಿಕ ಸ್ಫುಟತೆಯ ಹಾಗೂ ನೈಜ ರಾಷ್ಟ್ರೀಯ ದೃಷ್ಟಿಯ ಅಭಾವ ಎದ್ದು ಕಾಣುತ್ತದೆ. ಅಧಿಕಾರಾಕಾಂಕ್ಷೆ ಮತ್ತು ಪಕ್ಷರಾಜಕೀಯವೇ ಏಕೈಕ ನಿರ್ದೆಶಕ ಶಕ್ತಿಯಾಗಿದೆ. ಈ ಕಾರಣದಿಂದ ರಾಷ್ಟ್ರದ ಭದ್ರತೆ, ಅಖಂಡತೆ, ಸ್ವಾಯತ್ತತೆ ಮೊದಲಾದ ಆಧಾರಗಳು ಶಿಥಿಲಗೊಂಡಿವೆ. ಅದಕ್ಷತೆ, ಭ್ರಷ್ಟಾಚಾರ, ಛದ್ಮಸೆಕ್ಯುಲರಿಸಂ ಮೊದಲಾದವು ಈ ಶೈಥಿಲ್ಯದ ಕೆಲವು ಅಭಿವ್ಯಕ್ತಿಗಳು. ಈ ವಿಕೃತಿಗಳು ಎಷ್ಟು ದೂರ ಸಾಗಿವೆಯೆಂದರೆ ಆಧಾರಭೂತ ಸಂಗತಿಗಳನ್ನು ಕುರಿತ ಆರೋಗ್ಯಕರ ಸಂವಾದವೇ ಈಗ ವಿರಳವಾಗಿದೆ. ಈ ಪರಿಸರದಲ್ಲಿ ರಾಜ್ಯಶಾಸ್ತ್ರ್ತದಲ್ಲಿ ಸ್ನಾತಕೋತ್ತರ ಪದವೀಧರರಾದ ಗೋಪಾಲರಾವ ಹೇಜೀಬ್ (1936-2008) ಅವರ ಋಜುದೃಷ್ಟಿಯ ಮೊನಚಾದ ಬರಹಗಳು ಸತ್ಯದ ಪರವಾದ ಕಹಳೆಯಾಗಿದೆ; ಬೌದ್ಧಿಕ ಜಡತೆಗೆ ಸೂಜಿಮದ್ದಾಗಿದೆ. ಸಮಕಾಲೀನ ಇತಿಹಾಸ, ರಾಷ್ಟ್ರ ಭದ್ರತೆ, ವಿದೇಶಾಂಗ ನೀತಿ, ಸಂಸ್ಕೃತಿಯ ಮೇಲಣ ವಿಘಾತಗಳು ಸೆಕ್ಯುಲರಿಸಂ ಗವುಸಿನೊಳಗಿನ ಹೊಸ ಮೂಲಭೂತವಾದ, ಮತಾಂತರ, ಭಯೋತ್ಪಾದನೆ, ಭ್ರಷ್ಟಾಚಾರ, ನಾಯಕತ್ವ – ಈ ನಾನಾ ವಿಷಯಗಳ ತಲಸ್ವರ್ಶಿ ವಿಶ್ಲೇಷಣೆಯನ್ನೂ ಮಾಹಿತಿಯನ್ನೂ ಒಳಗೊಂಡ ಈ ಗ್ರಂಥದೊಳಗಿನ ಬರಹಗಳು ಕಳೆದ ಮೂರು ದಶಕಗಳ ವಿದ್ಯಮಾನಗಳ ಒಂದು ಸೀಳುನೋಟವನ್ನು ಒದಗಿಸುತ್ತವೆ. ಹೀಗೆ ಚಿಂತಕರಿಗೆ ಒಂದು ಅನುಪಮ ಆಕರಗ್ರಂಥವಾಗಿದೆ ’ಮಂಥನ’.

Additional information

Book No

ISBN

Author Name

Published Date

Language

Reviews

There are no reviews yet.

Be the first to review “ಮಂಥನ”

Your email address will not be published.

This site uses Akismet to reduce spam. Learn how your comment data is processed.